ರಾಮ ಬೇರೆಯಲ್ಲ
ಕೃಷ್ಣ ಬೇರೆಯಲ್ಲ
ಅಷ್ಟರಮಟ್ಟಿಗೆ ಗಾಢ
ಅವರಿಬ್ಬರ ಮೈತ್ರಿ
ರಾಮನಿಗಿಂತ ಕೃಷ್ಣನೇ
ಎಲ್ಲರಿಗೂ ಅಚ್ಚುಮೆಚ್ಚು.
ಎರಡು ದೇಹ ಒಂದೇ ಜೀವ
ಎಂಬಂತೆ ಬೆಳೆದು…
ಬೆಳೆದು ಬೆಳೆದು ದೊಡ್ಡವರಾದರು.
ಮದುವೆ, ಮಕ್ಕಳು ಎಲ್ಲಾ ಆಯಿತು.
ರಾಮನ ಮಕ್ಕಳನ್ನು ಮುದ್ದಿಸುತ್ತಾ
ಕೃಷ್ಣ ಹೇಳಿದ:
ರಾಮ, ನಾ ಬೇರೆ ಅಲ್ಲ, ನೀ ಬೇರೆ ಅಲ್ಲ
ನಿನ್ನ ತಂದೆ ತಾಯಿ ನನಗೂ
ಪ್ರೀತಿಯ, ಆತ್ಮೀಯ ಮಾತಾಪಿತರು.
ನಿನ್ನಣ್ಣ ತಮ್ಮಂದಿರು, ಅಕ್ಕ ತಂಗಿಯರು
ನನಗೂ ಅಷ್ಟೇ.
ನಿನ್ನ ಮಕ್ಕಳು ನೋಡು
ನನ್ನ ಎಷ್ಟು ಹಚ್ಚಿಕೊಂಡಿವೆ!
ನಿಜ ಹೇಳಬೇಕೆಂದರೆ,
ನಾನೇ ನೀನು, ನೀನೇ ನಾನು.
ನಿನ್ನ ತಾಯಿ ನನಗೂ ತಾಯಿ,
ನಿನ್ನ ತಂದೆ ನನಗೂ ತಂದೆ.
ನಿನ್ನ ಹೆಂಡತಿ….
ರಾಮ ಕೃಷ್ಣನ ಕೆನ್ನೆಗೆ ಬಾರಿಸಿದ!
ತಪ್ಪಲ್ಲವೇ?
*****
೧೪-೦೭-೧೯೯೦
Related Post
ಸಣ್ಣ ಕತೆ
-
ಕರಾಚಿ ಕಾರಣೋರು
ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…
-
ಗಿಣಿಯ ಸಾಕ್ಷಿ
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
-
ಸಾವಿಗೊಂದು ಸ್ಮಾರಕ
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ಬೆಟ್ಟಿ
ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…